Jaya Karnataka Janapara Vedike

Jaya Karnataka Janapara Vedike JKJV Jaya Karnataka Janapara Vedike (JKJV) is a nonprofit organization that aims at improving the quality of life for the people of Karnataka.

A truly democratic, non-political organization that has originated in response to the ever increasing problems of the people of this state. The list of woes is endless, such as, disparities in our society, the widening gap between the rich and the poor, corruption and inefficiency in our political system, an administrative system that has ignored the cries of the common man, the farmers, the stude

nts, homeless labourers, deprivation of women's rights, commercialisation of education and medical sector, food adulteration, the list is endless. The solution is when every single person in the government machinery is held accountable. JKJV aims to be a transparent bridge between the government and the common man. We also strongly believe in the principle, "Of the People, By the People, For the People" and aim at empowering the common man to fight for his rights, to say NO to corruption, NO to exploitation, to demand and get what rightfully belongs to him. Jaya Karnataka Janapara Vedike
Head Office Address:
# 912, 9th floor, Barton Center, M.G.Road, Bengaluru - 560 001. Contact: +91 9900044299
Email: [email protected], [email protected]

‘ಭಾವಪೂರ್ಣ ನಮನ’ ಜಯಕರ್ನಾಟಕ ಜನಪರ ವೇದಿಕೆಯಿಂದ ಆರ್. ಚಂದ್ರಪ್ಪ ಅವರಿಗೆ ಅರ್ಥಪೂರ್ಣವಾಗಿ ‘ಭಾವಪೂರ್ಣ ನಮನ’ ಸಲ್ಲಿಕೆ,ಕಾರ್ಯಕ್ರಮದಲ್ಲಿವಿವಿಧ ಕ...
07/09/2026

‘ಭಾವಪೂರ್ಣ ನಮನ’

ಜಯಕರ್ನಾಟಕ ಜನಪರ ವೇದಿಕೆಯಿಂದ ಆರ್. ಚಂದ್ರಪ್ಪ ಅವರಿಗೆ ಅರ್ಥಪೂರ್ಣವಾಗಿ ‘ಭಾವಪೂರ್ಣ ನಮನ’ ಸಲ್ಲಿಕೆ,

ಕಾರ್ಯಕ್ರಮದಲ್ಲಿ
ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಹೋರಾಟಗಾರರು ಹಾಗೂ ವೇದಿಕೆಯ ಪದಾಧಿಕಾರಿಗಳಿಂದ ಅಂತಿಮ ಗೌರವ

ಆತ್ಮೀಯರೆ,

“ವ್ಯಕ್ತಿ ಮರೆಯಾಗಬಹುದು… ಆದರೆ ಅವರು ಬಿತ್ತಿದ ಆದರ್ಶಗಳು ಹಾಗೂ ಹೋರಾಟದ ಹೆಜ್ಜೆ ಗುರುತುಗಳು ಎಂದಿಗೂ ಮರೆಯಾಗುವುದಿಲ್ಲ.”

ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಹಾಗೂ ಸಲಹೆಗಾರರಾಗಿ ಸಂಘಟನೆಯ ಬಲವರ್ಧನೆಗೆ ಅಮೂಲ್ಯ ಸೇವೆ ಸಲ್ಲಿಸಿದ, ಆತ್ಮೀಯರು ಹಾಗೂ ಮಾರ್ಗದರ್ಶಕರಾಗಿದ್ದ ಶ್ರೀಯುತ ಆರ್. ಚಂದ್ರಪ್ಪ ಅವರ ಜನಪರ ಸೇವೆ, ಹೋರಾಟದ ಬದುಕು ಹಾಗೂ ಸಂಘಟನೆಗೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸುತ್ತಾ, ಅವರ ಆತ್ಮಕ್ಕೆ ಶಾಂತಿ ಕೋರಿ ಜಯಕರ್ನಾಟಕ ಜನಪರ ವೇದಿಕೆಯ ವತಿಯಿಂದ ಬೆಂಗಳೂರಿನ ಬಾಪು ಆಡಿಟೋರಿಯಂ, ಗಾಂಧಿ ಭವನದಲ್ಲಿ ‘ಭಾವಪೂರ್ಣ ನಮನ’ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಆರ್. ಚಂದ್ರಪ್ಪ ಅವರ ಸೇವಾ ಬದುಕು, ಕನ್ನಡ ನಾಡು–ನುಡಿ, ಜನಪರ ಹೋರಾಟ ಹಾಗೂ ಸಂಘಟನೆಯ ಬಲವರ್ಧನೆಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಯಿತು. ಅವರೊಂದಿಗೆ ಒಡನಾಟ ಹೊಂದಿದ್ದ ಗಣ್ಯರು ಹಾಗೂ ಹೋರಾಟಗಾರರು ತಮ್ಮ ನೆನಪುಗಳನ್ನು ಹಂಚಿಕೊಂಡ ಸಂದರ್ಭದಲ್ಲಿ ಕಾರ್ಯಕ್ರಮ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಈ ಸಂದರ್ಭದಲ್ಲಿ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾದ ಶ್ರೀ ಸಾ.ರಾ. ಗೋವಿಂದ್, ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ. ಗುಣರಂಜನ್ ಶೆಟ್ಟಿ, ಆರ್. ಚಂದ್ರಪ್ಪ ಅವರ ಪತ್ನಿ ಶ್ರೀಮತಿ ಉಮಾವತಿ ಆರ್. ಚಂದ್ರಪ್ಪ ಹಾಗೂ ಕುಟುಂಬದ ಸದಸ್ಯರು, ವೇದಿಕೆಯ ರಾಜ್ಯಾಧ್ಯಕ್ಷರಾದ ಜೆ. ಶ್ರೀನಿವಾಸ್, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಹೋರಾಟಗಾರರು ಉಪಸ್ಥಿತರಿದ್ದರು.

ಅಲ್ಲದೆ, ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ, ಜಿಲ್ಲಾ, ತಾಲ್ಲೂಕು, ಕ್ಷೇತ್ರ, ಮಹಿಳಾ ಘಟಕ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮೆಲ್ಲರ ಪ್ರೀತಿಯ ಆರ್. ಚಂದ್ರಪ್ಪ ಅವರಿಗೆ ಅಂತಿಮ ಗೌರವ ಹಾಗೂ ಭಾವಪೂರ್ಣ ನಮನ ಸಲ್ಲಿಸಿದರು.

ಆರ್. ಚಂದ್ರಪ್ಪ ಅವರ ಅಗಲಿಕೆ ಸಂಘಟನೆಗೆ ಹಾಗೂ ಕನ್ನಡಪರ ಹೋರಾಟದ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರು ತೋರಿದ ಹೋರಾಟದ ಹಾದಿ, ಜನಪರ ಕಾಳಜಿ ಮತ್ತು ಸಂಘಟನಾ ಚಿಂತನೆಗಳು ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಿರಲಿವೆ.

“ಚಂದ್ರಪ್ಪ ಅವರು ನಮ್ಮೊಂದಿಗಿಲ್ಲದಿರಬಹುದು; ಆದರೆ ಅವರ ಆದರ್ಶ, ಹೋರಾಟದ ಹೆಜ್ಜೆ ಗುರುತುಗಳು ಹಾಗೂ ಕನ್ನಡ ನಾಡು–ನುಡಿಯ ಮೇಲಿನ ಕಾಳಜಿ ಎಂದೆಂದಿಗೂ ನಮ್ಮೊಂದಿಗೆ ಜೀವಂತವಾಗಿರುತ್ತದೆ.”

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.

🕯️ ಭಾವಪೂರ್ಣ ನಮನ 🕯️“ವ್ಯಕ್ತಿ ಮರೆಯಾಗಬಹುದು… ಆದರೆ ಅವರು ಬಿತ್ತಿದ ಆದರ್ಶಗಳು ಹಾಗೂ ಹೋರಾಟದ ಹೆಜ್ಜೆ ಗುರುತುಗಳು ಎಂದಿಗೂ ಮರೆಯಾಗುವುದಿಲ್ಲ.”ಜ...
05/09/2026

🕯️ ಭಾವಪೂರ್ಣ ನಮನ 🕯️

“ವ್ಯಕ್ತಿ ಮರೆಯಾಗಬಹುದು… ಆದರೆ ಅವರು ಬಿತ್ತಿದ ಆದರ್ಶಗಳು ಹಾಗೂ ಹೋರಾಟದ ಹೆಜ್ಜೆ ಗುರುತುಗಳು ಎಂದಿಗೂ ಮರೆಯಾಗುವುದಿಲ್ಲ.”

ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಹಾಗೂ ಸಲಹೆಗಾರರಾಗಿ ಸಂಘಟನೆಯ ಬಲವರ್ಧನೆಗೆ ಅಮೂಲ್ಯ ಸೇವೆ ಸಲ್ಲಿಸಿದ, ನಮ್ಮ ಆತ್ಮೀಯರು ಹಾಗೂ ಮಾರ್ಗದರ್ಶಕರಾದ ಶ್ರೀಯುತ ಆರ್. ಚಂದ್ರಪ್ಪ ಅವರ ಅಗಲಿಕೆ ನಮಗೆಲ್ಲ ತುಂಬಲಾರದ ನೋವು ಹಾಗೂ ನಷ್ಟವಾಗಿದೆ.

ಅವರ ಜನಪರ ಸೇವೆ, ಹೋರಾಟದ ಬದುಕು ಹಾಗೂ ಸಂಘಟನೆಗೆ ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ, ಅವರ ಆತ್ಮಕ್ಕೆ ಶಾಂತಿ ಕೋರಿ “ಭಾವಪೂರ್ಣ ನಮನ” ಕಾರ್ಯಕ್ರಮವನ್ನು ಜಯಕರ್ನಾಟಕ ಜನಪರ ವೇದಿಕೆಯ ವತಿಯಿಂದ ಆಯೋಜಿಸಲಾಗಿದೆ.

📅 ದಿನಾಂಕ: 07-09-2026, ಸೋಮವಾರ
⏰ ಸಮಯ: ಬೆಳಿಗ್ಗೆ 11.00 ಗಂಟೆಗೆ
📍 ಸ್ಥಳ: ಬಾಪು ಆಡಿಟೋರಿಯಂ, ಗಾಂಧಿ ಭವನ, ಕುಮಾರ ಪಾರ್ಕ್ ಈಸ್ಟ್, ಶಿವಾನಂದ ಸರ್ಕಲ್, ಬೆಂಗಳೂರು–560001.

ಈ ಭಾವಪೂರ್ಣ ಕಾರ್ಯಕ್ರಮದಲ್ಲಿ ರಾಜ್ಯ, ಜಿಲ್ಲಾ, ತಾಲ್ಲೂಕು, ವಿಧಾನಸಭಾ ಕ್ಷೇತ್ರ, ಹೋಬಳಿ, ಮಹಿಳಾ ಹಾಗೂ ವಕೀಲರ ಘಟಕಗಳ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಮ್ಮ ಪ್ರೀತಿಯ ಆರ್. ಚಂದ್ರಪ್ಪ ಅವರಿಗೆ ಅಂತಿಮ ಗೌರವ ಹಾಗೂ ಭಾವಪೂರ್ಣ ನಮನ ಸಲ್ಲಿಸಬೇಕಾಗಿ ವಿನಂತಿಸುತ್ತೇವೆ.

🙏 ಶ್ರೀಯುತ ಆರ್. ಚಂದ್ರಪ್ಪ ಅವರಿಗೆ ಭಾವಪೂರ್ಣ ನಮನಗಳು 🙏
🕯️ ಓಂ ಶಾಂತಿ… ಶಾಂತಿ… ಶಾಂತಿ… 🕯️

ಇಂತಿ ನಿಮ್ಮ:
ಕೇಂದ್ರ ಕಛೇರಿ,
ಜಯಕರ್ನಾಟಕ
ಜನಪರ ವೇದಿಕೆ.

ಭಾವಪೂರ್ಣ ಶ್ರದ್ಧಾಂಜಲಿಹೃದಯಕ್ಕೆ ಭಾರವಾಗುತ್ತಿದೆ…ಕನ್ನಡಪರ ಹೋರಾಟಗಾರರು ಹಾಗೂ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರರಾಗಿದ್ದ, ನಮ್ಮೆಲ್ಲ...
24/08/2026

ಭಾವಪೂರ್ಣ ಶ್ರದ್ಧಾಂಜಲಿ

ಹೃದಯಕ್ಕೆ ಭಾರವಾಗುತ್ತಿದೆ…

ಕನ್ನಡಪರ ಹೋರಾಟಗಾರರು ಹಾಗೂ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರರಾಗಿದ್ದ, ನಮ್ಮೆಲ್ಲರ ಪ್ರೀತಿಯ ಶ್ರೀ ಆರ್. ಚಂದ್ರಪ್ಪ ಸರ್ ಅವರು ನಮ್ಮನ್ನೆಲ್ಲ ಅಗಲಿ ಇಹಲೋಕ ತ್ಯಜಿಸಿರುವ ಸುದ್ದಿ ಅತ್ಯಂತ ದುಃಖವನ್ನುಂಟು ಮಾಡಿದೆ.

ಅವರ ಅಗಲಿಕೆ ಕನ್ನಡಪರ ಹೋರಾಟದ ಕ್ಷೇತ್ರಕ್ಕೆ ಹಾಗೂ ಜಯಕರ್ನಾಟಕ ಜನಪರ ವೇದಿಕೆಯ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಸದಾ ಹೋರಾಟದ ಮನೋಭಾವದಿಂದ ಸಮಾಜದ ಪರವಾಗಿ ಧ್ವನಿ ಎತ್ತುತ್ತಿದ್ದ ಅವರ ಸೇವೆ, ಸರಳ ವ್ಯಕ್ತಿತ್ವ ಹಾಗೂ ಹೋರಾಟದ ಬದುಕು ಸದಾ ಸ್ಮರಣೀಯ.

ಭಗವಂತನು ಅಗಲಿದ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದವರು, ಬಂಧು-ಬಳಗದವರು ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.

ಶ್ರೀಯುತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ಮೈಸೂರು ರಸ್ತೆ, ಆವಲಹಳ್ಳಿಯಲ್ಲಿರುವ ಅವರ ಸ್ವಗೃಹದಲ್ಲಿ ವ್ಯವಸ್ಥೆ ಮಾಡಲಾಗಿದ್ದು,

ನಾಳೆ ಮಧ್ಯಾಹ್ನ 2 ಗಂಟೆಗೆ ಆವಲಹಳ್ಳಿಯ ರುದ್ರಭೂಮಿಯಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು.

ಓಂ ಶಾಂತಿ 🙏🙏🙏

ಇಂತಿ,
ದುಃಖಪ್ತರು:
ಜಯಕರ್ನಾಟಕ ಜನಪರ ವೇದಿಕೆಯ ಸಮಸ್ತ ಕುಟುಂಬ

ಶಿಕಾರಿಪುರ: ಗುಟ್ಕಾ ನಿಷೇಧ ಸೇರಿದಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ದಿಟ್ಟ ಕ್ರಮಗಳಿಗೆ ಜಯಕರ್ನಾಟಕ ಜನಪರ ವೇದಿಕೆ ಬೆಂಬಲಆತ್ಮೀಯರೆ,ಜಯ ಕರ್...
19/08/2026

ಶಿಕಾರಿಪುರ: ಗುಟ್ಕಾ ನಿಷೇಧ ಸೇರಿದಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ದಿಟ್ಟ ಕ್ರಮಗಳಿಗೆ ಜಯಕರ್ನಾಟಕ ಜನಪರ ವೇದಿಕೆ ಬೆಂಬಲ

ಆತ್ಮೀಯರೆ,

ಜಯ ಕರ್ನಾಟಕ ಜನಪರ ವೇದಿಕೆಯ ಮಾನ್ಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ. ಗುಣರಂಜನ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ರಾಜ್ಯಾಧ್ಯಕ್ಷರಾದ ಶ್ರೀ ಜೆ. ಶ್ರೀನಿವಾಸ್ ಅವರ ಹಾಗೂ ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀ ಹೆಚ್.ರಾಮಚಂದ್ರಯ್ಯ ಅವರ ಸಲಹೆಯೊಂದಿಗೆ, ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ರಘುವೀರ್ ಸಿಂಗ್ ಅವರ ಸಹಕಾರದೊಂದಿಗೆ,

ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಹುಲಗಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ, ಶಿಕಾರಿಪುರ ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀ ಶಿವಯ್ಯ ಅವರ ಉಪಸ್ಥಿತಿಯಲ್ಲಿ, ಶಿಕಾರಿಪುರ ತಾಲ್ಲೂಕು ಘಟಕದ ವತಿಯಿಂದ ಇಂದು ಶಿಕಾರಿಪುರದ ಸುದ್ದಿ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ,

ಮಾನ್ಯ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೈಗೊಂಡಿರುವ ಗುಟ್ಕಾ ನಿಷೇಧ ಸೇರಿದಂತೆ ಹಲವು ದಿಟ್ಟ ಕ್ರಮಗಳನ್ನು ಜಯ ಕರ್ನಾಟಕ ಜನಪರ ವೇದಿಕೆ ಸ್ವಾಗತಿಸಿ, ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಾಯಿತು.

ವಿಶೇಷವಾಗಿ, ಹೋಟೆಲ್‌ಗಳು ಹಾಗೂ ಆಹಾರ ಮಳಿಗೆಗಳಲ್ಲಿ ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವಾಗುವ ರೀತಿಯಲ್ಲಿ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಸುವುದು ಹಾಗೂ ಕಳಪೆ ಆಹಾರ ಪೂರೈಸುವ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಚಿವರ ನಿರ್ಧಾರ ಶ್ಲಾಘನೀಯವಾಗಿದೆ ಎಂದು ವೇದಿಕೆ ತಿಳಿಸಿತು.

ಸಾರ್ವಜನಿಕರ ಆರೋಗ್ಯದೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ, ಗುಣಮಟ್ಟದ ಆಹಾರ ಹಾಗೂ ಆರೋಗ್ಯಕರ ವಾತಾವರಣವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಇಂತಹ ಜನಪರ ಹಾಗೂ ಆರೋಗ್ಯಪರ ನಿರ್ಧಾರಗಳಿಗೆ ಜಯ ಕರ್ನಾಟಕ ಜನಪರ ವೇದಿಕೆ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ಶಿವಮೊಗ್ಗ ಜಿಲ್ಲಾ ಹಾಗೂ ಶಿಕಾರಿಪುರ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.

ಬೆಂಗಳೂರು: ಟಿ.ಸಿ. ಪಾಳ್ಯದಲ್ಲಿ ರಾತ್ರೋರಾತ್ರಿ ಅಕ್ರಮ ಮರಗಳ ಕಡಿತ: ಕಠಿಣ ಕ್ರಮಕ್ಕೆ ಜಯಕರ್ನಾಟಕ ಜನಪರ ವೇದಿಕೆ–ಐಕೇರ್ ಬ್ರಿಗೇಡ್ ಆಗ್ರಹಆತ್ಮೀಯ...
18/08/2026

ಬೆಂಗಳೂರು: ಟಿ.ಸಿ. ಪಾಳ್ಯದಲ್ಲಿ ರಾತ್ರೋರಾತ್ರಿ ಅಕ್ರಮ ಮರಗಳ ಕಡಿತ: ಕಠಿಣ ಕ್ರಮಕ್ಕೆ ಜಯಕರ್ನಾಟಕ ಜನಪರ ವೇದಿಕೆ–ಐಕೇರ್ ಬ್ರಿಗೇಡ್ ಆಗ್ರಹ

ಆತ್ಮೀಯರೆ,

ಕೆ.ಆರ್. ಪುರಂ ವ್ಯಾಪ್ತಿಯ ಟಿ.ಸಿ. ಪಾಳ್ಯ ಪ್ರದೇಶದಲ್ಲಿ ಯಾವುದೇ ಅಧಿಕೃತ ಅನುಮತಿ ಪಡೆಯದೆ ರಾತ್ರೋರಾತ್ರಿ ಮರಗಳನ್ನು ಕಡಿದು ಹಾಕಿರುವ ಆರೋಪದ ಘಟನೆಗೆ ಜಯಕರ್ನಾಟಕ ಜನಪರ ವೇದಿಕೆ ಹಾಗೂ ಐಕೇರ್ ಬ್ರಿಗೇಡ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅಕ್ರಮ ಮರ ಕಡಿತ ನಡೆಸಿದವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದೆ.

ಈ‌ ಕುರಿತು ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಜೆ.ಶ್ರೀನಿವಾಸ್ ಸುದ್ದಿಗಾರರೊಂದಿಗೆ ಮತನಾಡಿ, ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ, ಶಿಕ್ಷಣ, ರೈತರ, ಮಹಿಳೆಯರ, ಕಾರ್ಮಿಕರ, ದೀನದಲಿತರ ಪರವಾಗಿ ಕಳೆದ ಕೆಲವು ದಶಕಗಳಿಂದ ಚಳುವಳಿಗಳನ್ನು ರೂಪಿಸಿದ ಅನುಭವಿಗಳ, ಬುದ್ದಿಜೀವಿಗಳ, ಪರಿಸರವಾದಿಗಳ, ಸಾಹಿತಿಗಳ, ಲೇಖಕರ, ಎಲ್ಲಾ ವರ್ಗದ ಹೋರಾಟಗಾರರ, ಸ್ವಾಭಿಮಾನಿ ಕಾರ್ಯಕರ್ತರ ಜೊತೆಯಲ್ಲಿ ಪರಿಸರವಾದಿಗಳು, ಕನ್ನಡ ಪರ ಹೋರಾಟಗಾರರು ಮತ್ತು ಸಂಸ್ಥಾಪಕ ಅಧ್ಯಕ್ಷರಾದ ಬಿ. ಗುಣರಂಜನ್ ಶೆಟ್ಟಿರವರ ಮಾರ್ಗದರ್ಶನದಲ್ಲಿ ನಮ್ಮ ಜಯಕರ್ನಾಟಕ ಜನಪರ ವೇದಿಕೆ ಶಿಕ್ಷಣ, ಆರೋಗ್ಯ, ಪರಿಸರ, ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆಯ ಮುಖ್ಯಉದ್ದೇಶದ ಜೊತೆಯಲ್ಲಿ ಸಂವಿಧಾನ ಮತ್ತು ಕಾನೂನು ಬದ್ದವಾಗಿ ಕರ್ನಾಟಕದ ಸೇವಾ ಕೈಂಕರ್ಯದಲ್ಲಿ ಸಾಗುತ್ತಿದ್ದು,

ನಗರೀಕರಣದ ಹೆಸರಿನಲ್ಲಿ ಬೆಂಗಳೂರಿನಾದ್ಯಂತ ಮರಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ ಹಾಗೂ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯದೆ ಮರಗಳನ್ನು ಕಡಿದು ಹಾಕಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ. ಮರಗಳು ಕೇವಲ ಪರಿಸರದ ಭಾಗವಲ್ಲ; ಅವು ನಗರದ ಶುದ್ಧ ಗಾಳಿ, ತಾಪಮಾನ ನಿಯಂತ್ರಣ, ಮಳೆನೀರು ಸಂರಕ್ಷಣೆ ಹಾಗೂ ಸಾರ್ವಜನಿಕರ ಆರೋಗ್ಯದೊಂದಿಗೆ ನೇರವಾಗಿ ಸಂಬಂಧ ಹೊಂದಿವೆ.

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾತ್ರೋರಾತ್ರಿ ಮರಗಳನ್ನು ಕಡಿದು ಹಾಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮರಗಳನ್ನು ಕಡಿದು ಹಾಕಲು ಯಾರಿಂದ ಅನುಮತಿ ಪಡೆಯಲಾಗಿದೆ? ಯಾವ ಉದ್ದೇಶಕ್ಕಾಗಿ ಮರಗಳನ್ನು ತೆರವುಗೊಳಿಸಲಾಗಿದೆ? ಸಂಬಂಧಪಟ್ಟ ಇಲಾಖೆಯಿಂದ ಸ್ಥಳ ಪರಿಶೀಲನೆ ಹಾಗೂ ಅನುಮತಿ ನೀಡಲಾಗಿದೆಯೇ? ಎಂಬುದನ್ನು ಅಧಿಕಾರಿಗಳು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

ಅಕ್ರಮವಾಗಿ ಮರ ಕಡಿತ ನಡೆಸಿರುವುದು ಸಾಬೀತಾದಲ್ಲಿ, ಮರಗಳ ಸಂಖ್ಯೆ, ಮರಗಳ ಜಾತಿ ಹಾಗೂ ಪರಿಸರಕ್ಕೆ ಉಂಟಾಗಿರುವ ಹಾನಿಯನ್ನು ಪರಿಗಣಿಸಿ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಪ್ರಕರಣ ದಾಖಲಿಸಿ, ದಂಡ ವಿಧಿಸುವುದರ ಜೊತೆಗೆ ಕಾನೂನು ಕ್ರಮ ಕೈಗೊಳ್ಳಬೇಕು. ಯಾವುದೇ ಪ್ರಭಾವ, ಒತ್ತಡ ಅಥವಾ ರಾಜಕೀಯ ಹಸ್ತಕ್ಷೇಪಕ್ಕೆ ಮಣಿಯದೆ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.

ಅಲ್ಲದೆ, ಕಡಿದು ಹಾಕಿರುವ ಮರಗಳ ಸ್ಥಳಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿ, ಮರ ಕಡಿತಕ್ಕೆ ಬಳಸಿರುವ ಅನುಮತಿ ಪತ್ರಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಬೇಕು. ಅಕ್ರಮವಾಗಿ ಮರಗಳನ್ನು ಕಡಿದಿರುವುದು ದೃಢಪಟ್ಟರೆ, ಪರಿಸರ ಹಾನಿಗೆ ಪರಿಹಾರವಾಗಿ ಸೂಕ್ತ ಸಂಖ್ಯೆಯಲ್ಲಿ ಸ್ಥಳೀಯವಾಗಿ ಬೆಳೆದುಬರುವ ಮರಗಳನ್ನು ನೆಟ್ಟು, ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನೂ ಸಂಬಂಧಪಟ್ಟವರಿಂದಲೇ ವಹಿಸಿಕೊಳ್ಳಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

ಬೆಂಗಳೂರು ನಗರವನ್ನು ಕಾಂಕ್ರೀಟ್ ಕಾಡಾಗಿ ಪರಿವರ್ತಿಸುವ ಪ್ರಯತ್ನಗಳಿಗೆ ಕಡಿವಾಣ ಹಾಕುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಾರ್ವಜನಿಕ ಆಸ್ತಿಯಾಗಿರುವ ಮರಗಳನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ತಮ್ಮ ವೈಯಕ್ತಿಕ ಉದ್ದೇಶಕ್ಕಾಗಿ ಮನಬಂದಂತೆ ಕಡಿದು ಹಾಕಲು ಅವಕಾಶ ನೀಡಬಾರದು. ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ಈ ಹಿನ್ನೆಲೆಯಲ್ಲಿ ಜಯಕರ್ನಾಟಕ ಜನಪರ ವೇದಿಕೆ ಹಾಗೂ ಐಕೇರ್ ಬ್ರಿಗೇಡ್ ವತಿಯಿಂದ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳು, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿ, ಟಿ.ಸಿ. ಪಾಳ್ಯದಲ್ಲಿ ನಡೆದಿರುವ ಮರಗಳ ಕಡಿತದ ಕುರಿತು ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, “ಮರ ಉಳಿಸಿ–ಪರಿಸರ ಉಳಿಸಿ, ಬೆಂಗಳೂರು ಉಳಿಸಿ” ಎಂಬ ಆಶಯದೊಂದಿಗೆ ಅಕ್ರಮ ಮರ ಕಡಿತದ ವಿರುದ್ಧ ಮುಂದೆಯೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿರುವುದಾಗಿ ತಿಳಿಸಿದರು.

ಈ ವೇಳೆ ರಾಜ್ಯ ಕಾರ್ಯಾಧ್ಯಕ್ಷ ಹೆಚ್.ರಾಮಚಂದ್ರಯ್ಯ, ರಾಜ್ಯ ಪ್ರಧಾನ ಸಂಚಾಲಕ ಟಿ.ಪ್ರಕಾಶ್ ಗೌಡ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಜಿ.ಎಸ್.ಪುಷ್ಪಲತಾ, ಐಕೇರ್ ಬ್ರಿಗೇಡ್ ಸಂಸ್ಥೆಯ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಬೆಂಗಳೂರು ಜಿಲ್ಲಾ ಅಧ್ಯಕ್ಷ ಲೋಕೇಶ್.ಪಿ, ಉಪಾಧ್ಯಕ್ಷ ಅನಿಲ್ ಶೆಟ್ಟಿ, ಪ್ರಧಾನ ಸಂಚಾಲಕ ರಾಜೇಶ್, ಕೆ.ಆರ್.ಪುರಂ ಕ್ಷೇತ್ರ ಅಧ್ಯಕ್ಷ ರವಿಕಿರಣ್, ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಗಂಗಾಧರ್, ಸರ್ವಜ್ಞನಗರ ಮಣಿ, ರಾಜಾಜಿನಗರ ಕ್ಷೇತ್ರದ ಅಧ್ಯಕ್ಷರಾದ ಕಾರ್ತಿಕ್, ಮಹದೇವಪುರ ಅರವಿಂದ್, ಜರ್ನಾಧನ್ ಸೇರಿದಂತೆ ರಾಜ್ಯ, ಬೆಂಗಳೂರು ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು, ಮಹಿಳಾಧ್ಯಕ್ಷರು, ಪದಾಧಿಕಾರುಗಳು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.

ಚಿಕ್ಕಬಳ್ಳಾಪುರ: ಜಯಕರ್ನಾಟಕ ಜನಪರ ವೇದಿಕೆ ಚಿಕ್ಕಬಳ್ಳಾಪುರ ಜಿಲ್ಲಾ ಹಾಗೂ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸರ್ಕಾರ ಮತ್ತು ಜನರ ಮಧ್ಯೆ ಸೇ...
15/08/2026

ಚಿಕ್ಕಬಳ್ಳಾಪುರ: ಜಯಕರ್ನಾಟಕ ಜನಪರ ವೇದಿಕೆ ಚಿಕ್ಕಬಳ್ಳಾಪುರ ಜಿಲ್ಲಾ ಹಾಗೂ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ

ಸರ್ಕಾರ ಮತ್ತು ಜನರ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಗುರಿ: ರಾಜ್ಯಧಕ್ಷ ಜೆ.ಶ್ರೀನಿವಾಸ್

ಆತ್ಮೀಯರೆ,

ಜಯಕರ್ನಾಟಕ ಜನಪರ ವೇದಿಕೆಯ ಚಿಕ್ಕಬಳ್ಳಾಪುರ ಜಿಲ್ಲಾ ಹಾಗೂ ತಾಲೂಕು ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ.ಗುಣರಂಜನ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ, ರಾಜ್ಯಾಧ್ಯಕ್ಷ ಜೆ.ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾಗಿ ಶ್ರೀನಿವಾಸ್,ಜಿಲ್ಲಾ ಉಪಾಧ್ಯಕ್ಷರಾಗಿ ನರಸಿಂಹಮೂರ್ತಿ,ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಮಂಜುನಾಥ್,ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವೇಣುಗೋಪಾಲ್ (ಡೈರಿ ಗೋಪಿ), ಗುಡಿಬಂಡೆ ತಾಲೂಕು ಅಧ್ಯಕ್ಷರಾಗಿ ಕೆ.ವಿ.ಶ್ರೀನಿವಾಸ್, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷರಾಗಿ ಮುರಳಿ,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶಿಲ್ಪ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಂಜುಳಾ ಅವರನ್ನು ಆಯ್ಕೆ ಮಾಡಿ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಜೆ. ಶ್ರೀನಿವಾಸ್ ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಬಿ.ಗುಣರಂಜನ ಶೆಟ್ಟಿ ಅವರ ನೇತೃತ್ವದಲ್ಲಿ ಸಂಘಟನೆ ಹಲವು ವರ್ಷಗಳಿಂದ ಸರ್ಕಾರ ಮತ್ತು ಜನರ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಪರಿಸರ ಸಂರಕ್ಷಣೆ,ಮಾದಕ ವಸ್ತುಗಳ ದುರುಪಯೋಗದ ವಿರುದ್ಧ ಯುವಕರಲ್ಲಿ ಜಾಗೃತಿ ಮೂಡಿಸುವುದು,ಕ್ರೀಡಾಭಿವೃದ್ಧಿಗೆ ಉತ್ತೇಜನ ನೀಡುವುದು,ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಹೋರಾಟ ನಡೆಸುವುದು ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಸಂಘಟನೆ ತೊಡಗಿಸಿಕೊಂಡಿದೆ ಎಂದು ಹೇಳಿದರು.

ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಕೆಲಸ ಮಾಡಲಾಗುತ್ತಿದ್ದು,ಸರ್ಕಾರಿ ಜಾಗಗಳ ಒತ್ತುವರಿ ತಡೆಗಟ್ಟುವ ನಿಟ್ಟಿನಲ್ಲಿಯೂ ಸಂಘಟನೆ ವಿಶೇಷ ಕಾಳಜಿ ವಹಿಸುತ್ತಿದೆ ಎಂದು ತಿಳಿಸಿದರು. ಸಂಘಟನೆಯ ಹೋರಾಟಗಳು ಶಿಸ್ತಿನಿಂದ ಕೂಡಿದ್ದು,ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ನಡೆಯುವುದಿಲ್ಲ.ಎಲ್ಲೆಲ್ಲಿ ಅನ್ಯಾಯ ನಡೆಯುತ್ತದೆಯೋ ಅಲ್ಲಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಂಘಟನೆ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಸರ್ಕಾರದ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಕಾರ್ಯನಿರ್ವಹಿಸುವುದರ ಜೊತೆಗೆ ಶೋಷಿತರು ಮತ್ತು ನ್ಯಾಯ ವಂಚಿತರ ಪರವಾಗಿ ನಿಲ್ಲುವ ಸಂಕಲ್ಪ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ರಾಮಚಂದ್ರಯ್ಯ,ಕಾನೂನು ಘಟಕದ ರಾಜ್ಯಾಧ್ಯಕ್ಷ ಮಂಜುನಾಥ್,ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಲತಾ, ರಾಜ್ಯ ಪ್ರಧಾನ ಸಂಚಾಲಕ ಪ್ರಕಾಶ್ ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಗೋಪಿ, ಪ್ರವೀಣ್ ಕುಮಾರ್ ಶೆಟ್ಟಿ, ರಾಜ್ಯ ಮಹಿಳಾ ಘಟಕದ ಸಂಘಟನಾ ಕಾರ್ಯದರ್ಶಿ ಪವಿತ್ರ, ಹಾಗೂ ಸಂಘಟನೆಯ ರಾಜ್ಯ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.

ನಾಡಿನ ಸಮಸ್ತೆ ಜನತೆಗೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳುಇಂತಿ ನಿಮ್ಮ:ಜಯಕರ್ನಾಟಕಜನಪರ ವೇದಿಕೆ.
15/08/2026

ನಾಡಿನ ಸಮಸ್ತೆ ಜನತೆಗೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.

ಬೆಂಗಳೂರು: ವಿಶೇಷ ಆಹಾರ ಸುರಕ್ಷತಾ ತಪಾಸಣೆ ವಿಚಾರವಾಗಿ ಮಾನ್ಯ ಆರೋಗ್ಯ ಸಚಿವರನ್ನು ಅಭಿನಂದಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ...
13/08/2026

ಬೆಂಗಳೂರು: ವಿಶೇಷ ಆಹಾರ ಸುರಕ್ಷತಾ ತಪಾಸಣೆ ವಿಚಾರವಾಗಿ ಮಾನ್ಯ ಆರೋಗ್ಯ ಸಚಿವರನ್ನು ಅಭಿನಂದಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲು ಮನವಿ ಸಲ್ಲಿಸಿದ ಜಯಕರ್ನಾಟಕ ಜನಪರ ವೇದಿಕೆ ಹಾಗೂ ಐಕೇರ್ ಬ್ರಿಗೇಡ್ ಸಂಸ್ಥೆ

ಆತ್ಮೀಯರೆ,

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಮಾನ್ಯ ಶ್ರೀ ಯು.ಟಿ. ಖಾದರ್ ಅವರ ಮಾರ್ಗದರ್ಶನದಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಗೆ ಬೆಂಗಳೂರಿನಾದ್ಯಂತ ವಿಶೇಷ ತಪಾಸಣಾ ಅಭಿಯಾನ ಕೈಗೊಳ್ಳಲು ನೀಡಿದ ನಿರ್ದೇಶನ ಹಾಗೂ ಸಮಯೋಚಿತ ಮತ್ತು ದೃಢ ಕ್ರಮಕ್ಕಾಗಿ ನಮ್ಮ ಜಯಕರ್ನಾಟಕ ಜನಪರ ವೇದಿಕೆ ಹಾಗೂ ಐಕೇರ್ ಬ್ರಿಗೇಡ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬಿ.ಗುಣರಂಜನ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಹಾಗೂ ಐಕೇರ್ ಬ್ರಿಗೇಡ್ ಸಂಸ್ಥೆಯ ವತಿಯಿಂದ ಮಾನ್ಯ ಆರೋಗ್ಯ ಸಚಿವರಾದ ಸನ್ಮಾನ್ಯ ಶ್ರೀ ಯು.ಟಿ.ಖಾದರ್ ಅವರನ್ನು ಭೇಟಿಮಾಡಿ ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು.

ಆಹಾರ ಸಂಗ್ರಹಣೆ ಮತ್ತು ವಿತರಣಾ ಕೇಂದ್ರಗಳ ತಪಾಸಣೆಗಾಗಿ ನಿಯೋಜಿತ ಅಧಿಕಾರಿಗಳು (Designated Officers) ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳನ್ನು ಒಳಗೊಂಡ 30 ತಂಡಗಳನ್ನು ರಚಿಸಿ ನಿಯೋಜಿಸಿರುವುದು ಸಾರ್ವಜನಿಕ ಆರೋಗ್ಯದ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಶ್ಲಾಘನೀಯ ಕ್ರಮವಾಗಿದೆ. ಇಂತಹ ಸಕ್ರಿಯ ಜಾರಿ ಕ್ರಮಗಳು ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಯ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡುತ್ತವೆ.

ಆದರೆ, ಇದೇ ವೇಳೆ ಈ ತಪಾಸಣೆಗಳಿಂದ ಹೊರಬರುತ್ತಿರುವ ಅಂಶಗಳು ಅತ್ಯಂತ ಆತಂಕಕಾರಿಯಾಗಿದ್ದು, ಸಹಜವಾಗಿಯೇ ಬೆಂಗಳೂರಿನ ನಾಗರಿಕರಲ್ಲಿ ಗಂಭೀರ ಕಳವಳವನ್ನು ಉಂಟುಮಾಡಿವೆ.

ಬೆಂಗಳೂರಿನ ಜನರು ತಮ್ಮ ಕುಟುಂಬಗಳೊಂದಿಗೆ ಭೇಟಿ ನೀಡುವ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಅಪಾರ ನಂಬಿಕೆಯನ್ನು ಇಟ್ಟಿರುತ್ತಾರೆ. ವಿಶೇಷವಾಗಿ ಹೆಸರಾಂತ ಹಾಗೂ ಸ್ಟಾರ್ ಹೋಟೆಲ್‌ಗಳ ವಿಷಯದಲ್ಲಿ ಈ ನಂಬಿಕೆ ಇನ್ನಷ್ಟು ಹೆಚ್ಚಿರುತ್ತದೆ. ಗ್ರಾಹಕರು ಹೆಚ್ಚಿನ ದರವನ್ನು ಪಾವತಿಸುವಾಗ, ಅತ್ಯುನ್ನತ ಮಟ್ಟದ ಸ್ವಚ್ಛತೆ, ಆಹಾರದ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಕಾಪಾಡಲಾಗುತ್ತಿದೆ ಎಂಬ ನ್ಯಾಯಸಮ್ಮತ ನಿರೀಕ್ಷೆಯನ್ನು ಹೊಂದಿರುತ್ತಾರೆ.

ಹೆಸರಾಂತ ಹೋಟೆಲ್‌ಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸುವ ಸಂಗ್ರಹಣಾ ಕೇಂದ್ರಗಳಲ್ಲಿ ವರದಿಯಾಗಿರುವ ಅಂಶಗಳು — ಅವಧಿ ಮುಗಿಯುವ ಹಂತದಲ್ಲಿದ್ದ ಉತ್ಪನ್ನಗಳು, ಸಂಗ್ರಹಣಾ ಪರಿಸ್ಥಿತಿಗಳ ಕುರಿತ ಆತಂಕಗಳು, ಸುಮಾರು 70 ಕೆ.ಜಿ. ಸಾಸ್‌ಗಳು ಹಾಗೂ 10 ಲೀಟರ್ ಪಾನೀಯಗಳ ವಶಪಡಿಸಿಕೊಳ್ಳುವಿಕೆ, ಜೊತೆಗೆ 5 ಮಾಂಸದ ಮಾದರಿಗಳು ಮತ್ತು ಇತರೆ 13 ಆಹಾರ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಸಂಗ್ರಹಿಸಿರುವುದು — ಆಹಾರ ಪೂರೈಕೆ, ಸಂಗ್ರಹಣೆ, ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತವೆ.

ಇದು ಕೇವಲ ಕಳಪೆ ಸೇವೆ ಅಥವಾ ನಿಯಮ ಪಾಲನೆಯಲ್ಲಿನ ಲೋಪದ ಪ್ರಶ್ನೆಯಲ್ಲ. ಇದು ಸಾರ್ವಜನಿಕ ಆರೋಗ್ಯ, ಮಾನವ ಜೀವ ಮತ್ತು ಪ್ರತಿಯೊಬ್ಬ ನಾಗರಿಕನ ನಂಬಿಕೆಗೆ ಸಂಬಂಧಿಸಿದ ಅತ್ಯಂತ ಗಂಭೀರ ವಿಷಯವಾಗಿದೆ.

ನಮ್ಮ ಸಂಸ್ಕೃತಿ ನಮಗೆ “ಅತಿಥಿ ದೇವೋ ಭವ” ಎಂದು ಬೋಧಿಸುತ್ತದೆ — ಅತಿಥಿಯನ್ನು ದೇವರಂತೆ ಕಾಣಬೇಕು. ಸಾವಿರಾರು ಜನರಿಗೆ ಆಹಾರ ಪೂರೈಸುವ ಜವಾಬ್ದಾರಿ ಹೊಂದಿರುವ ಸಂಸ್ಥೆಗಳು ಅಗತ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಕಾಪಾಡುವಲ್ಲಿ ವಿಫಲವಾದರೆ, ಅದು ಅವರ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಗ್ರಾಹಕ ಮತ್ತು ಕುಟುಂಬದ ವಿಶ್ವಾಸಕ್ಕೆ ಮಾಡಿದ ಗಂಭೀರ ದ್ರೋಹವಾಗುತ್ತದೆ.

ಅಸುರಕ್ಷಿತ ಅಥವಾ ಕಲುಷಿತ ಆಹಾರ ಸೇವನೆಯ ಪರಿಣಾಮಗಳು ಯಾವಾಗಲೂ ತಕ್ಷಣವೇ ಗೋಚರಿಸಬೇಕೆಂದಿಲ್ಲ. ಅದರ ದುಷ್ಪರಿಣಾಮಗಳು ಕಾಲಕ್ರಮೇಣ ಹೊರಹೊಮ್ಮುವ ಸಾಧ್ಯತೆಯೂ ಇದೆ. ಆದ್ದರಿಂದ ನಾಗರಿಕರಿಗೆ ತಿಳಿದುಕೊಳ್ಳುವ ಸಂಪೂರ್ಣ ಹಕ್ಕಿದೆ:

ಇದಕ್ಕೆ ಯಾರು ಹೊಣೆಗಾರರು?
ಯಾವ ಸಂಸ್ಥೆಗಳು ಅಥವಾ ಹೋಟೆಲ್‌ಗಳು ಈ ಉತ್ಪನ್ನಗಳನ್ನು ಪಡೆದಿವೆ?
ಅಂತಹ ಉತ್ಪನ್ನಗಳನ್ನು ಗ್ರಾಹಕರಿಗೆ ಈಗಾಗಲೇ ಪೂರೈಸಲಾಗಿದೆಯೇ ಅಥವಾ ಬಡಿಸಲಾಗಿದೆಯೇ?
ಇಂತಹ ಪದ್ಧತಿಗಳು ಎಷ್ಟು ಸಮಯದಿಂದ ನಡೆಯುತ್ತಿದ್ದವು?
ಹಾಗೂ ಪ್ರಸ್ತುತ ತಪಾಸಣೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯಲ್ಲಿ ಯಾವುದೇ ವೈಫಲ್ಯಗಳಾಗಿದ್ದವೆಯೇ?

ದಾಳಿ ಮತ್ತು ತಪಾಸಣೆಗಳು ಅತ್ಯಂತ ಮುಖ್ಯವಾದ ಮೊದಲ ಹೆಜ್ಜೆಯಾಗಿದ್ದರೂ, ಈ ವಿಷಯವು ಕೇವಲ ತಾತ್ಕಾಲಿಕ ಮುಚ್ಚುವಿಕೆ ಅಥವಾ ಹಣಕಾಸಿನ ದಂಡ ವಿಧಿಸುವುದರೊಂದಿಗೆ ಅಂತ್ಯಗೊಳ್ಳಬಾರದು. ಪ್ರಯೋಗಾಲಯದ ವರದಿಗಳು ಮತ್ತು ತನಿಖೆಯಿಂದ ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ಉದ್ದೇಶಪೂರ್ವಕ, ನಿರ್ಲಕ್ಷ್ಯಪೂರ್ಣ ಅಥವಾ ಗಂಭೀರ ಉಲ್ಲಂಘನೆಗಳು ದೃಢಪಟ್ಟಲ್ಲಿ, ಸಂಬಂಧಪಟ್ಟವರ ವಿರುದ್ಧ ಅನ್ವಯಿಸುವ ಕಾನೂನಿನಡಿ ಅಗತ್ಯವಿರುವಲ್ಲಿ ಕ್ರಿಮಿನಲ್ ಮೊಕದ್ದಮೆ ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

ತಮ್ಮ ಮಾರ್ಗದರ್ಶನದಲ್ಲಿ ಕೈಗೊಂಡಿರುವ ಈ ಮಹತ್ವದ ಕ್ರಮವನ್ನು ನಾವು ಮತ್ತೊಮ್ಮೆ ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇವೆ. ಇಲಾಖೆಯು ಮಾಡಿರುವ ಈ ದೃಢ ಆರಂಭಕ್ಕೆ ಸಮಾನವಾಗಿ ದೃಢವಾದ ತನಿಖೆ, ಪಾರದರ್ಶಕತೆ ಮತ್ತು ಕಾನೂನು ಜಾರಿ ಕ್ರಮಗಳು ಮುಂದುವರಿದಲ್ಲಿ, ಈ ಅಭಿಯಾನವು ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದಾದ್ಯಂತ ಆಹಾರ ಸುರಕ್ಷತಾ ಮಾನದಂಡಗಳನ್ನು ಬಲಪಡಿಸುವಲ್ಲಿ ಮಹತ್ವದ ತಿರುವಾಗಿ ಪರಿಣಮಿಸಬಹುದು.

ಆದ್ದರಿಂದ, ತಮ್ಮ ಮಾರ್ಗದರ್ಶನದಲ್ಲಿ ಆರಂಭಿಸಲಾದ ಈ ವಿಶೇಷ ಅಭಿಯಾನವನ್ನು ಸಮಗ್ರ ತನಿಖೆ, ಸಂಪೂರ್ಣ ಪೂರೈಕೆ ಸರಪಳಿಯ ಪತ್ತೆಹಚ್ಚುವಿಕೆ, ತನಿಖಾ ಫಲಿತಾಂಶಗಳ ಪಾರದರ್ಶಕತೆ ಹಾಗೂ ತಪ್ಪಿತಸ್ಥರೆಂದು ಕಂಡುಬರುವ ಪ್ರತಿಯೊಂದು ಸಂಸ್ಥೆ ಮತ್ತು ವ್ಯಕ್ತಿಯ ವಿರುದ್ಧ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳುವ ಮೂಲಕ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕೆಂದು ಜಯಕರ್ನಾಟಕ ಜನಪರ ವೇದಿಕೆ ಹಾಗೂ ಐಕೇರ್ ಬ್ರಿಗೇಡ್ ಸಂಸ್ಥೆಯ ವತಿಯಿಂದ ವಿನಮ್ರವಾಗಿ ಮನವಿ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಹಾಗೂ ಐಕೇರ್ ಬ್ರಿಗೇಡ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.

ಆತ್ಮೀಯರೆ,ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅವರು, ಜಯಕರ್ನಾಟಕ ಜನಪರ ವೇದಿಕೆಯ ಬೊಮ್ಮ...
10/08/2026

ಆತ್ಮೀಯರೆ,

ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅವರು, ಜಯಕರ್ನಾಟಕ ಜನಪರ ವೇದಿಕೆಯ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಅಂಬರೀಷ್ ಅವರೊಂದಿಗೆ ಯುವ ಮುಖಂಡರಾದ ಚೇತನ್ ಅವರ ಮನೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಜೆ. ಶ್ರೀನಿವಾಸ್, ಬೆಂಗಳೂರು ಜಿಲ್ಲಾ ಉಪಾಧ್ಯಕ್ಷರಾದ ಅನಿಲ್ ಶೆಟ್ಟಿ ಸೇರಿದಂತೆ ಸಂಘಟನೆಯ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.

ಚಿಕ್ಕಬಳ್ಳಾಪುರ: ಜಯಕರ್ನಾಟಕ ಜನಪರ ವೇದಿಕೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಹಾಗೂ ತಾಲ್ಲೂಕು ಮುಖಂಡರ ಸೇರ್ಪಡೆಆತ್ಮೀಯರೆ,ಜಯಕರ್ನಾಟಕ ಜನಪರ ವೇದಿಕೆಯ ...
10/08/2026

ಚಿಕ್ಕಬಳ್ಳಾಪುರ: ಜಯಕರ್ನಾಟಕ ಜನಪರ ವೇದಿಕೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಹಾಗೂ ತಾಲ್ಲೂಕು ಮುಖಂಡರ ಸೇರ್ಪಡೆ

ಆತ್ಮೀಯರೆ,

ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅವರ ನಾಯಕತ್ವವನ್ನು ಮೆಚ್ಚಿ ಹಾಗೂ ಸಂಘಟನೆಯ ತತ್ವ–ಸಿದ್ಧಾಂತಗಳನ್ನು ಗೌರವಿಸಿ, ಚಿಕ್ಕಬಳ್ಳಾಪುರ ಜಿಲ್ಲೆಯ ಹಾಗೂ ತಾಲ್ಲೂಕು ಮಟ್ಟದ ಹಲವು ಮುಖಂಡರು ಮತ್ತು ಮಹಿಳಾ ಮುಖಂಡರು ಜಯಕರ್ನಾಟಕ ಜನಪರ ವೇದಿಕೆಗೆ ಸೇರ್ಪಡೆಗೊಂಡರು.

ನೂತನವಾಗಿ ಸಂಘಟನೆಗೆ ಸೇರ್ಪಡೆಗೊಂಡ ಚಿಕ್ಕಬಳ್ಳಾಪುರ ಜಿಲ್ಲಾ ಹಾಗೂ ತಾಲ್ಲೂಕು ಮುಖಂಡರನ್ನು ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅವರು ಸಂಘಟನೆಯ ಶಾಲು ಹೊದಿಸಿ, ಬಾವುಟವನ್ನು ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಅಧ್ಯಕ್ಷರಾದ ಶ್ರೀ ಜೆ. ಶ್ರೀನಿವಾಸ್, ರಾಜ್ಯ ಪ್ರಧಾನ ಸಂಚಾಲಕರಾದ ಶ್ರೀ ಟಿ. ಪ್ರಕಾಶ್ ಗೌಡ ಹಾಗೂ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಜಿ.ಎಸ್. ಪುಷ್ಪಲತಾ ಸೇರಿದಂತೆ ಸಂಘಟನೆಯ ಹಲವು ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ನೂತನವಾಗಿ ಸೇರ್ಪಡೆಗೊಂಡ ಮುಖಂಡರು ಸಂಘಟನೆಯ ತತ್ವ–ಸಿದ್ಧಾಂತಗಳನ್ನು ಪಾಲಿಸಿಕೊಂಡು, ಜನಪರ ಹೋರಾಟಗಳಿಗೆ ಕೈಜೋಡಿಸುವುದಾಗಿ ತಿಳಿಸಿದರು.

ಇಂತಿ ನಿಮ್ಮ:
ಜಯಕರ್ನಾಟಕ
ಜನಪರ ವೇದಿಕೆ.

Address

JAYA KARNATAKA JANAPARA VEDIKE (Regd. ) #912, 9th Floor, Barton Center, M. G. Road
Bangalore
560001

Opening Hours

Monday 9:30am - 6pm
Tuesday 9:30am - 6pm
Wednesday 9:30am - 6pm
Thursday 9:30am - 6pm
Friday 9:30am - 6pm
Saturday 9:30am - 6pm

Alerts

Be the first to know and let us send you an email when Jaya Karnataka Janapara Vedike posts news and promotions. Your email address will not be used for any other purpose, and you can unsubscribe at any time.

Contact The Business

Send a message to Jaya Karnataka Janapara Vedike:

Shortcuts

Share